Fake News - Kannada
 

ಕೇಜ್ರಿವಾಲ್ ಜೊತೆಗಿರುವ ಮಕ್ಕಳ ಕಳ್ಳತನದ ಆರೋಪಿ ಪ್ರಭಾ ಮಿಂಜ್ ನ ಈ ಫೋಟೊ ಬಂಧನಕ್ಕೂ ಮುಂಚೆ ತೆಗೆದಿದ್ದು, ಇತ್ತೀಚಿನದ್ದಲ್ಲ

0

ಮಕ್ಕಳ ಕಳ್ಳಸಾಗಣೆ ಆರೋಪದಲ್ಲಿ  ಇತ್ತೀಚೆಗೆ ಬಂಧಿತರಾಗಿರುವ ಪ್ರಭಾ ಮಿಂಜ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಇರುವ ಅವರ ಹಳೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಭಾ ಮಿಂಜ್ ಅವರು ಕೇಜ್ರಿವಾಲ್‌ಗೆ ಆಪ್ತರಾಗಿರುವ ಕಾರಣ ಅವರನ್ನು ಬಂಧಿಸಿರುವ ಕುರಿತು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ ಎಂದು ಆ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆ ಪೋಸ್ಟ್ ಎಷ್ಟು ನಿಜ ಎಂದು ನೋಡೋಣ.

ಪ್ರತಿಪಾದನೆ: ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಪ್ರಭಾ ಮಿಂಜ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಇರುವ ಹಳೆಯ ಫೋಟೋ.

ನಿಜಾಂಶ: ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಪ್ರಭಾ ಮಿಂಜ್ ಮುನಿ ಕುಳಿತಿದ್ದಾರೆ. ಪ್ರಭಾ ಮಿಂಜ್‌ ಅವರನ್ನು ಜಾರ್ಖಂಡ್‌ನಿಂದ ದೆಹಲಿಗೆ ಅಪ್ರಾಪ್ತ ಬಾಲಕಿಯರನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ 2018 ರಲ್ಲಿ ಪೊಲೀಸರು ಬಂಧಿಸಿದ್ದರು. 2018 ರಲ್ಲಿ ಬಂಧಿತರಾಗಿದ್ದ ಪ್ರಭಾ ಮಿಂಜ್ ಮುನಿಗೆ ಜಾರ್ಖಂಡ್ ಹೈಕೋರ್ಟ್ 2019 ರ ಏಪ್ರಿಲ್‌ನಲ್ಲಿ ಜಾಮೀನು ನೀಡಿತ್ತು. ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಪ್ರಭಾ ಮಿಂಜ್ ಮುನಿಯನ್ನು ಇತ್ತೀಚೆಗೆ ಬಂಧಿಸಿದ ಯಾವುದೇ ವರದಿಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಹಕ್ಕು ತಪ್ಪಾಗಿದ್ದು, ದಿಕ್ಕುತಪ್ಪಿಸುವಂತಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ  ಹುಡುಕಿದಾಗ 2018 ರಲ್ಲಿಈ ಒಂದೇ ಚಿತ್ರವನ್ನು ಬಳಸಿಕೊಂಡು ವಿವಿಧ ಲೇಖನಗಳನ್ನು ಹಲವಾರು ಸುದ್ದಿ ಪ್ರಕಟಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಆ ಲೇಖನಗಳನ್ನು ಹಲವು ವೆಬ್‌ಸೈಟ್‌ಗಳಲ್ಲಿ ಕಾಣಬಹುದು. ಹೆಣ್ಣುಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬಂಧಿತರಾಗಿರುವ ಪ್ರಭಾಮಿಂಜ್ ಮುನಿ, ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಲೇಖನದಲ್ಲಿ ತಿಳಿಸಿದ್ದಾರೆ. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು 25 ಸೆಪ್ಟೆಂಬರ್ 2018 ರಂದು ಹಂಚಿಕೊಂಡ ಅದೇ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 2017ರಲ್ಲಿ ಪ್ರಭಾ ಮಿಂಜ್ ಮುನಿ ಆಯೋಜಿಸಿದ್ದ ಕ್ರಿಸ್‌ಮಸ್ ಪಾರ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾಗ ತೆಗೆದ ಫೋಟೋ ಎಂದು ಕಪಿಲ್ ಮಿಶ್ರಾ ಟ್ವಿಟ್ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 25 ಸೆಪ್ಟೆಂಬರ್ 2018 ರಂದು ಪ್ರಭಾ ಮಿಂಜ್ ಮುನಿಯ ಬಂಧನವನ್ನು ವಿವರಿಸುವ ಲೇಖನವನ್ನು ಪ್ರಕಟಿಸಿತು. ಪ್ರಭಾ ಮಿಂಜ್ ಮುನಿ ಅವರನ್ನು ಪೊಲೀಸರು ಸೆಪ್ಟೆಂಬರ್ 23, 2018 ರಂದು ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಲೇಖನ ಹೇಳಿದೆ. ಮತ್ತೊಂದು ಲೇಖನದಲ್ಲಿ, ಪ್ರಭಾ ಮಿಂಜ್ ಮುನಿ ಅವರು 2014 ರಲ್ಲಿ ನಿರಾಶ್ರಿತರಿಗಾಗಿ ಎನ್‌ಜಿಒವನ್ನು ಪ್ರಾರಂಭಿಸಿದರು ಮತ್ತು ಹಣ ಮತ್ತು ಉದ್ಯೋಗದ ಹುಡುಕಾಟದಲ್ಲಿ ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ವಾಸಿಸುವ ಬುಡಕಟ್ಟು ಹುಡುಗಿಯರನ್ನು ಕಳ್ಳಸಾಗಣೆ ಮಾಡಿದರು ಎಂದು ವರದಿ ಮಾಡಿದೆ. ಪ್ರಭಾ ಮಿಂಜ್ ಮುನಿ ಮತ್ತು ಅವರ ಪತಿ ರೋಹಿತ್ ಮುನಿ ಅವರು ‘ಸರ್ವೋದಯ ಆದಿವಾಸಿ ಜನಕಲ್ಯಾಣ ಸಂಸ್ಥೆ’ ಮತ್ತು ಇತರ ಎನ್‌ಜಿಒಗಳ ಹೆಸರಿನಲ್ಲಿ ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಮತ್ತು ದೆಹಲಿಯ ಪ್ರಮುಖ ರಾಜಕಾರಣಿಗಳನ್ನು ಮುಖ್ಯ ಅತಿಥಿಗಳಾಗಿ ಮಾಡುತ್ತಿದ್ದಾರೆ ಎಂದು ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿವೆ. 2017 ರಲ್ಲಿ ಸರ್ವೋದಯ ಆದಿವಾಸಿ ಜನಕಲ್ಯಾಣ ಸಂಸ್ಥೆಯು ಆಯೋಜಿಸಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹಾಜರಿದ್ದ ಬಗ್ಗೆ ವರದಿ ಮಾಡಿದ ಲೇಖನ ಇಲ್ಲಿದೆ.

ಸೆಪ್ಟೆಂಬರ್ 2018 ರಲ್ಲಿ ಬಂಧಿತರಾಗಿದ್ದ ಪ್ರಭಾ ಮಿಂಜ್ ಮುನಿಗೆ ಜಾರ್ಖಂಡ್ ಹೈಕೋರ್ಟ್ ಏಪ್ರಿಲ್ 2019 ರಲ್ಲಿ ಜಾಮೀನು ನೀಡಿತು. ಪ್ರಭಾ ಮಿಂಜ್ ಮುನಿಯನ್ನು ನಂತರ ಮಕ್ಕಳು ಅಥವಾ ಹುಡುಗಿಯರ ಕಳ್ಳಸಾಗಣೆ ಆರೋಪದ ಮೇಲೆ ಮರು ಬಂಧಿಸಿದ ಯಾವುದೇ ವರದಿಗಳಿಲ್ಲ. ಈ ವಿವರಗಳನ್ನು ಆಧರಿಸಿ, ಫೋಟೋದಲ್ಲಿ ಕಾಣುವ ಪ್ರಭಾ ಮಿಂಜ್ ಮುನಿಯನ್ನು 2018 ರಲ್ಲಿ ಪೊಲೀಸರು ಬಂಧಿಸಿದ್ದಾರೆ ಮತ್ತು ಇತ್ತೀಚೆಗೆ ಬಂಧಿಸಲಾಗಿಲ್ಲ ಎಂದು ಖಚಿತವಾಗಿ ಹೇಳಬಹುದು.

ಒಟ್ಟಾರೆಯಾಗಿ ಈ ಫೋಟೋದಲ್ಲಿ ಕೇಜ್ರಿವಾಲ್ ಅವರೊಂದಿಗೆ ಕುಳಿತಿದ್ದ ಪ್ರಭಾಮಿಂಜ್ ಮುನಿಯನ್ನು 2018 ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು ಮತ್ತು ಇತ್ತೀಚೆಗೆ ಬಂಧಿಸಲಾಗಿಲ್ಲ.

Share.

About Author

Comments are closed.

scroll