Fake News - Kannada
 

ಶಾಲೆಗಳಲ್ಲಿ ‘ಭಗವದ್ಗೀತೆ’ ಮತ್ತು ‘ರಾಮಾಯಣ’ಬೋಧನೆಯನ್ನು ನಿಷೇಧಿಸುವ ‘ಆರ್ಟಿಕಲ್‌ 30 (ಎ)’ ಸಂವಿಧಾನದಲ್ಲಿ ಇಲ್ಲ

0

ಸಂವಿಧಾನದ ಆರ್ಟಿಕಲ್ 30 ಎ ಅನ್ನು ತೆಗೆದುಹಾಕುವುದರಿಂದ ಶಾಲೆಗಳಿಗೆ ‘ಭಗವದ್ಗೀತಾ’ಮತ್ತು ‘ರಾಮಾಯಣ’ ಕಲಿಸಲು ಅವಕಾಶ ಸಿಗುತ್ತದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ವಿಶ್ಲೇಷಿಸಲು ಪ್ರಯತ್ನಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಆರ್ಟಿಕಲ್ 30 ಎ ಶಾಲೆಗಳಲ್ಲಿ ‘ಗೀತಾ’  ಮತ್ತು ‘ರಾಮಾಯಣ’ಬೋಧನೆಯನ್ನು ನಿರ್ಬಂಧಿಸುತ್ತದೆ.

ಸತ್ಯಾಂಶ: 30 ಎ ವಿಧಿ ಎಂಬ ವಿಧಿ ಭಾರತೀಯ ಸಂವಿಧಾನದಲ್ಲಿ ಇಲ್ಲ. ಅಲ್ಲದೆ, ಆರ್ಟಿಕಲ್ 30 (1, 1 ಎ ಮತ್ತು 2) ‘ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕು’ಗಳ  ಕುರಿತು ಹೇಳುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಭಾರತೀಯ ಸಂವಿಧಾನದಲ್ಲಿ ಆರ್ಟಿಕಲ್ 30 ಎ ಬಗ್ಗೆ ಹುಡುಕಿದಾಗ, ಸಂವಿಧಾನದಲ್ಲಿ ‘ಆರ್ಟಿಕಲ್ 30 ಎ’ ಇಲ್ಲ ಎಂದು ತಿಳಿದುಬಂದಿದೆ. 30 (1), 30 (1 ಎ) ಮತ್ತು 30 ಆರ್ಟಿಕಲ್‌ಗಳಿವೆ. ಆದರೆ ಅವುಗಳು ಕೂಡಾ ‘ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳ’ಬಗ್ಗೆ ಮಾತನಾಡುತ್ತದೆ.

ಆರ್ಟಿಕಲ್ 30 (1) ಎಲ್ಲಾ ಅಲ್ಪಸಂಖ್ಯಾತರಿಗೆ (ಧರ್ಮ ಅಥವಾ ಭಾಷೆಯ ಆಧಾರದ ಮೇಲೆ) ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ (ಎನ್‌ಸಿಎಂಇಐ) 2004 ರಲ್ಲಿ ಸ್ಥಾಪಿಸಲಾಯಿತು ಮತ್ತು ಆರ್ಟಿಕಲ್ 30 ರಲ್ಲಿ ಪ್ರತಿಪಾದಿಸಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸ್ಥಿತಿ, ಗುರುತಿಸುವಿಕೆ, ಸಂಬಂಧ ಮತ್ತು ಸಂಬಂಧಿತ ವಿಷಯಗಳಿಗಾಗಿ ಎನ್‌ಸಿಎಂಇಐ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಭಾರತದ ಸಂವಿಧಾನದ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿ ಓದಬಹುದು. ಅಲ್ಲದೆ, ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಯ ಅವಲೋಕನವನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಶಾಲೆಗಳಲ್ಲಿ ‘ಭಗವದ್ಗೀತಾ’ ಮತ್ತು ‘ರಾಮಾಯಣ’ ಬೋಧನೆಯನ್ನು ನಿಷೇಧಿಸುವ ಆರ್ಟಿಕಲ್ 30 (ಎ) ಭಾರತ ಸಂವಿಧಾನದಲ್ಲಿ ಇಲ್ಲ.

Share.

About Author

Comments are closed.

scroll