ಅಪ್ಡೇಟ್ (30 ಜನವರಿ 2025): ವ್ಯಕ್ತಿಯೊಬ್ಬ ಮಾತ್ರೆಗಳನ್ನು ಪುಡಿ ಮಾಡಿ, ನೀರಿನಲ್ಲಿ ಬೆರೆಸಿ, ಖರ್ಜೂರಕ್ಕೆ ಪೇಸ್ಟ್ ತುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಂಬರುವ ರಂಜಾನ್ನಲ್ಲಿ ಖರ್ಜೂರದಲ್ಲಿ ಅಪಾಯಕಾರಿ ವಿಷವನ್ನು ಬೆರೆಸಿ ಮುಸ್ಲಿಮರಿಗೆ ಮಾರುವ ಮೂಲಕ ಮುಸ್ಲಿಮರನ್ನು ಕೊಲ್ಲಲು ಯೋಜಿಸುತ್ತಿದ್ದಾರೆ ಎಂದು ಕ್ಲೇಮ್ ನಲ್ಲಿ ಹೇಳಲಾಗಿದೆ. ಆದರೆ, ಕೆಳಗೆ ವಿವರಿಸಿದಂತೆ, ಇದರಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ. 11 ಜನವರಿ 2024 ರಂದು ಹೌರಾ ಜಿಆರ್ಪಿ ಪೊಲೀಸರು ಹೌರಾ ರೈಲ್ವೆ ನಿಲ್ದಾಣದ ಹಳೆಯ ಪ್ಲಾಟ್ಫಾರ್ಮ್ ಸಂಖ್ಯೆ 7 ರಲ್ಲಿ ಬಂಧಿಸಲ್ಪಟ್ಟ ನಂತರ ಹೌರಾ ಜಿಆರ್ಪಿ ಪೊಲೀಸ್ ಠಾಣೆಯಲ್ಲಿ ಖಜೂರಗಳೊಂದಿಗೆ ಮಾದಕ ಮಾತ್ರೆಗಳನ್ನು ಹೇಗೆ ಮರೆಮಾಡುತ್ತಾರೆ ಎಂಬುದನ್ನು ದರೋಡೆ ಗ್ಯಾಂಗ್ನ ಸದಸ್ಯರು ಪ್ರದರ್ಶಿಸುತ್ತಿರುವ ವೈರಲ್ ವೀಡಿಯೊ ತೋರಿಸುತ್ತದೆ.
ಮುಸ್ಲಿಂ ಮಾರಾಟಗಾರರು ಬಂಜೆತನವನ್ನು ಸೃಷ್ಟಿಸಲು ಔಷಧಿಗಳೊಂದಿಗೆ ಕಲಬೆರಕೆ ಮಾಡಿದ ಖರ್ಜೂರವನಿಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದ್ದು. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮಾತ್ರೆಗಳನ್ನು ಪುಡಿಮಾಡಿ, ನೀರಿನೊಂದಿಗೆ ಬೆರೆಸಿ, ಖರ್ಜೂರಕ್ಕೆ ಸೇರಿಸುವುದನ್ನು ಕಾಣಬಹುದು. ಇದರ ಜೊತೆಗೆ, ಸಮವಸ್ತ್ರದಲ್ಲಿರುವ ವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಈ ಚಟುವಟಿಕೆಯಲ್ಲಿ ಎಷ್ಟು ಕಾಲದಿಂದ ತೊಡಗಿಸಿಕೊಂಡಿದ್ದಾನೆ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಮುಸ್ಲಿಂ ವ್ಯಾಪಾರಿಗಳು ಖರ್ಜೂರವನ್ನು ಬಂಜೆತನ ಉಂಟುಮಾಡುವ ಔಷಧಿಗಳೊಂದಿಗೆ ಕಲಬೆರಕೆ ಮಾಡಿ ಹಿಂದೂಗಳಿಗೆ ಮಾರಾಟ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ಜನವರಿ 11, 2024 ರಂದು, ಹೌರಾ ಜಿಆರ್ಪಿ ಪೊಲೀಸರು ಹೌರಾ ರೈಲ್ವೆ ನಿಲ್ದಾಣದ ಹಳೆಯ ಕಾಂಪ್ಲೆಕ್ಸ್ ಪ್ಲಾಟ್ಫಾರ್ಮ್ ಸಂಖ್ಯೆ 7 ರಿಂದ ರೈಲುಗಳಲ್ಲಿ ದರೋಡೆ ಮಾಡುತ್ತಿದ್ದ ಮೂವರು ದರೋಡೆಕೋರರ ಗುಂಪನ್ನು ಬಂಧಿಸಿದ್ದರು. ಈ ವೀಡಿಯೊವನ್ನು ಹೌರಾ ಜಿಆರ್ಪಿ ನಿಲ್ದಾಣದಲ್ಲಿ ರೆಕಾರ್ಡ್ ಮಾಡಲಾಗಿದೆ. ಅಲ್ಲಿ ದರೋಡೆಕೋರ ತಂಡದ ಸದಸ್ಯನೊಬ್ಬ ಖರ್ಜೂರದ ಒಳಗೆ ಮಾದಕ ಮಾತ್ರೆಗಳನ್ನು ಹೇಗೆ ಮರೆಮಾಡುತ್ತಾರೆ ಎಂಬುದನ್ನು ತೋರಿಸಿದ್ದರು. ಇದರಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ ಆಯಾಮವಿಲ್ಲ. ಬಂಧಿತ ವ್ಯಕ್ತಿಗಳು ಶಂಬ್ರು ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ವೈರಲ್ ವೀಡಿಯೊದ ಕುರಿತು ತಿಳಿಯಲು, ನಾವು ವೀಡಿಯೊದಿಂದ ಕೀಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು 13 ಜನವರಿ 2025 ರಂದು ‘ತಾಜಾ ಟಿವಿ’ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊ (ಆರ್ಕೈವ್ ಮಾಡಿದ ಲಿಂಕ್) ಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊದ ವಿವರಣೆಯ ಪ್ರಕಾರ, ರೈಲುಗಳಲ್ಲಿ ದರೋಡೆ ಮಾಡುವ ದರೋಡೆಕೋರ ಗ್ಯಾಂಗ್ನ್ನು ಈ ವಿಡಿಯೋ ತೋರಿಸುತ್ತದೆ. ಖರ್ಜೂರಕ್ಕೆ ಮಾದಕ ದ್ರವ್ಯಗಳನ್ನು ಬೆರೆಸಿ ಪ್ರಯಾಣಿಕರನ್ನು ದರೋಡೆ ಮಾಡಲು ಗ್ಯಾಂಗ್ ಒಂದು ವಿಶಿಷ್ಟ ವಿಧಾನವನ್ನು ಬಳಸುತ್ತದೆ. RPF ತಂಡವು ಅವರನ್ನು ಹೌರಾ ನಿಲ್ದಾಣದಲ್ಲಿ ಬಂಧಿಸಿದೆ. ಬೇರೆ ಸೋಶಿಯಲ್ ಮೀಡಿಯಾ ಉಸೆರ್ಸ್ ಇದೇ ರೀತಿಯ ವಿವರಣೆಯೊಂದಿಗೆ ಪೋಸ್ಟ್ ಮಾಡಿದ ಅದೇ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ, ಇಲ್ಲಿ).

ನಂತರ ನಾವು ‘ದಿ ಲೋಕಲ್ ಜರ್ನಲಿಸ್ಟ್’ ಎಂಬ ಸುದ್ದಿ ವೆಬ್ಸೈಟ್, ಫೇಸ್ಬುಕ್ ಪೇಜ್ ಮತ್ತು ಇನ್ಸ್ಟಾಗ್ರಾಮ್ ಪೇಜ್ನಲ್ಲಿ ನಡೆಸುತ್ತಿರುವ ಕೋಲ್ಕತ್ತಾದ ಸ್ಥಳೀಯ ಸುದ್ದಿ ವರದಿಗಾರರನ್ನು ಸಂಪರ್ಕಿಸಿದೆವು. ನಮ್ಮೊಂದಿಗೆ ಮಾತನಾಡಿದ ಅವರು, ಈ ವೀಡಿಯೊ ಹೌರಾ ಜಿಆರ್ಪಿ ಪೊಲೀಸ್ ಠಾಣೆಯಿಂದ ಬಂದಿದ್ದು, ದರೋಡೆಕೋರ ತಂಡವು ಹೌರಾ ಜಿಆರ್ಪಿ ಪೊಲೀಸರು ಬಂಧಿಸಿದ ನಂತರ ಪ್ರಯಾಣಿಕರಿಗೆ ಮದ್ದಿನ ಮಾತ್ರೆಗಳನ್ನು ಖರ್ಜೂರದ (ಖಜೂರ್) ಮೂಲಕ ನೀಡಿ ರೈಲುಗಳಲ್ಲಿ ಹೇಗೆ ದರೋಡೆ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ನಂತರ ನಾವು ಪಶ್ಚಿಮ ಬಂಗಾಳ ಪೊಲೀಸರ ವೆಬ್ಸೈಟ್ಗೆ ಭೇಟಿ ನೀಡಿ ಈ ಘಟನೆಗೆ ಸಂಬಂಧಿಸಿದ ಎಫ್ಐಆರ್ ಅನ್ನು ವೀಕ್ಷಿಸಿದ್ದೇವೆ. ಎಫ್ಐಆರ್ ಪ್ರಕಾರ, ಜನವರಿ 11, 2025 ರಂದು, ಹೌರಾ ರೈಲು ನಿಲ್ದಾಣದ ಹಳೆಯ ಕಾಂಪ್ಲೆಕ್ಸ್ ಪ್ಲಾಟ್ಫಾರ್ಮ್ ಸಂಖ್ಯೆ 7 ರಿಂದ ಮೂವರು ದರೋಡೆಕೋರರ ಗುಂಪನ್ನು ಬಂಧಿಸಲಾಯಿತು. ಅವರು ಪ್ರಯಾಣಿಕರಿಗೆ ಖರ್ಜೂರದ ಜೊತೆಗೆ ಅಮಲು ಮಾತ್ರೆಗಳನ್ನು (ಅಟಿವಾನ್ 2 ಎಂಜಿ) ಬೆರೆಸಿ ರೈಲುಗಳಲ್ಲಿ ದರೋಡೆ ಮಾಡುತ್ತಿದ್ದರು. ಎಫ್ಐಆರ್ನಲ್ಲಿ ಬಂಧಿತ ಆರೋಪಿಗಳು ಶಂಬ್ರು ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಉಲ್ಲೇಖಿಸಲಾಗಿದೆ. ಈ ಘಟನೆಯಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಇಲ್ಲಿ ನೋಡಬಹುದು.

ಇದಲ್ಲದೆ, ಈ ಘಟನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಹೌರಾ ಜಿಆರ್ಪಿ ಪೊಲೀಸ್ ಠಾಣೆಯನ್ನು ಸಹ ಸಂಪರ್ಕಿಸಿದ್ದೇವೆ. ನಮ್ಮೊಂದಿಗೆ ಮಾತನಾಡಿದ ಹೌರಾ ಜಿಆರ್ಪಿ ಪೊಲೀಸ್ ಅಧಿಕಾರಿಗಳು, ಈ ದರೋಡೆಕೋರರು ಪ್ರಯಾಣಿಕರಿಗೆ ಅಮಲಿನ ತಿನಿಸುಗಳನ್ನು ನೀಡುವ ಮೂಲಕ ರೈಲುಗಳಲ್ಲಿ ದರೋಡೆ ಮಾಡುತ್ತಾರೆ. ಆದರೆ ಇದರಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ ಎಂದು ತಿಳಿಸಿದ್ದಾರೆ. ದರೋಡೆಕೋರರು ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ಬಳಸುವ ಮಾತ್ರೆಗಳು ದುರ್ಬಲತೆಯನ್ನು ಉಂಟುಮಾಡುವ ಔಷಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊವು ಹೌರಾ ಜಿಆರ್ಪಿ ಪೊಲೀಸ್ ಠಾಣೆಯಲ್ಲಿ ದರೋಡೆಕೋರ ತಂಡದ ಸದಸ್ಯರು ಖರ್ಜೂರದೊಳಗೆ ಮಾದಕ ಮಾತ್ರೆಗಳನ್ನು ಹೇಗೆ ಮರೆಮಾಡುತ್ತಾರೆ ಎಂಬುದನ್ನು ಪ್ರದರ್ಶಿಸುವುದನ್ನು ತೋರಿಸುತ್ತದೆ.