Fake News - Kannada
 

SIR ಘೋಷಣೆಯ ನಂತರ ಅಕ್ರಮ ಬಾಂಗ್ಲಾದೇಶಿಯರು ಹೊರಡುತ್ತಿರುವ ದೃಶ್ಯ ಎಂದು ಪಶ್ಚಿಮ ಬಂಗಾಳದಲ್ಲಿ ಕಾಳಿ ವಿಗ್ರಹ ವಿಸರ್ಜನೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

0

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) 2025ರ ನವೆಂಬರ್ 04 ರಂದು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ, ಚುನಾವಣಾ ಆಯೋಗವು ಎಸ್‌ಐಆರ್  ಕುರಿತು ಪ್ರಕಟಣೆ ನೀಡಿದ ನಂತರ ಅಕ್ರಮ ಬಾಂಗ್ಲಾದೇಶಿಯರು ಸಾಮೂಹಿಕವಾಗಿ ರಾಜ್ಯವನ್ನು ತೊರೆಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ ಎಂಬ ಕ್ಲೈಮ್ ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ (ಇಲ್ಲಿ) ಒಂದು ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ. 

ಕ್ಲೇಮ್: ಎಸ್‌ಐಆರ್ (SIR) ಘೋಷಣೆಯ ನಂತರ ಅಕ್ರಮ ಬಾಂಗ್ಲಾದೇಶಿಯರು ಪಶ್ಚಿಮ ಬಂಗಾಳವನ್ನು ತೊರೆಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ಆಗಿರುವ ವಿಡಿಯೋ ಎಸ್‌ಐಆರ್ ಘೋಷಣೆಯ ನಂತರ ಅಕ್ರಮ ಬಾಂಗ್ಲಾದೇಶಿಯರು ಪಶ್ಚಿಮ ಬಂಗಾಳವನ್ನು ತೊರೆಯುತ್ತಿರುವುದನ್ನು ತೋರಿಸುತ್ತಿಲ್ಲ. ಇದು  ನದಿಯಾ ಜಿಲ್ಲೆಯ ಫಂಕಾತಲಾ ಗ್ರಾಮದಲ್ಲಿ (ಶಿಖರಪುರ) ಮಾಥಾಭಂಗಾ ನದಿಯ ದಡದಲ್ಲಿ ಕಾಳಿ ವಿಗ್ರಹ ವಿಸರ್ಜನೆಯ ದೃಶ್ಯವಾಗಿದೆ. ಸ್ಥಳೀಯ ಪೊಲೀಸರು ವಿಡಿಯೋದ ಸ್ಥಳವನ್ನು ದೃಢಪಡಿಸಿದ್ದಾರೆ, ಮತ್ತು ಪಶ್ಚಿಮ ಬಂಗಾಳ ಪೊಲೀಸರು ಕೂಡ ಈ ವೈರಲ್ ಕ್ಲೈಮ್ ಸುಳ್ಳು ಎಂದು ಹೇಳಿದ್ದಾರೆ. ಹಾಗಾಗಿ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ನಾನು ಈ ವೈರಲ್ ವಿಡಿಯೋದ ಪ್ರಮುಖ ಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಮಗೆ 30 ಅಕ್ಟೋಬರ್ 2025 ರಂದು ನೇಹಾ ಮೊಂಡಲ್ ಎಂಬ ಯೂಸರ್ ಪೋಸ್ಟ್ ಮಾಡಿದ ಫೇಸ್‌ಬುಕ್ ಲೈವ್‌ಸ್ಟ್ರೀಮ್ ಸಿಕ್ಕಿತು. ಈ ವಿಡಿಯೋದಲ್ಲಿ, ಅವರು ವಿಸರ್ಜನೆಯನ್ನು ನೋಡಲು ಶಿಖರಪುರಕ್ಕೆ ಬಂದಿರುವುದಾಗಿ ಹೇಳುವುದನ್ನು ಕೇಳಬಹುದು.

ನಾವು ಎರಡೂ ವಿಡಿಯೋಗಳನ್ನು ಹೋಲಿಸಿದಾಗ, ಮಹಿಳೆಯ ಫೇಸ್‌ಬುಕ್ ಲೈವ್‌ಸ್ಟ್ರೀಮ್‌ನಲ್ಲಿರುವ ಸ್ಥಳವು ವೈರಲ್ ವಿಡಿಯೋದಲ್ಲಿ ಕಂಡುಬರುವ ಸ್ಥಳಕ್ಕೆ ಹೊಂದಿಕೆಯಾಗುತ್ತದೆ ಎಂದು ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋ ಮತ್ತು ಲೈವ್‌ಸ್ಟ್ರೀಮ್ ನಡುವಿನ ಹೋಲಿಕೆಯನ್ನು ಕೆಳಗೆ ತೋರಿಸಲಾಗಿದೆ:

Alt ನ್ಯೂಸ್ ನೇಹಾ ಮೊಂಡಲ್ ಅವರನ್ನು ಸಂಪರ್ಕಿಸಿತು, ಅವರು ವಿಡಿಯೋದಲ್ಲಿ ಕಾಣುವ ಜನರು ಮಾಥಾಭಂಗಾ ನದಿಯಲ್ಲಿ ಕಾಳಿ ವಿಗ್ರಹ ವಿಸರ್ಜನೆಯನ್ನು ನೋಡಲು ಹೋಗುತ್ತಿದ್ದರು ಎಂದು ತಿಳಿಸಿದರು. ನಮ್ಮ ಹುಡುಕಾಟದಲ್ಲಿ, ಶಿಖರಪುರವು ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಕರೀಂಪುರ್ II ಸಿಡಿ ಬ್ಲಾಕ್‌ನ ಮುರುಟಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಾಗಿದೆ ಎಂದು ತಿಳಿದುಬಂದಿದೆ. ಈ ಗ್ರಾಮವು ಫಂಕಾತಲಾದಲ್ಲಿ ನಡೆಯುವ ಕಾಳಿ ಪೂಜೆಗೆ ಪ್ರಸಿದ್ಧವಾಗಿದ್ದು, ಇದು ಸ್ಥಳೀಯರಲ್ಲದೆ ದೂರದ ಪ್ರದೇಶಗಳಿಂದಲೂ ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಮಾಥಾಭಂಗಾವು ಗಡಿನಾಡು ನದಿಯಾಗಿದ್ದು, ಇದು ಬಾಂಗ್ಲಾದೇಶದ ಪದ್ಮಾದಿಂದ ಹುಟ್ಟುತ್ತದೆ. ನದಿಯಾ ಜಿಲ್ಲೆಯ ಗಡಿಯಲ್ಲಿ ಭಾರತವನ್ನು ಪ್ರವೇಶಿಸಿ ನಂತರ ಅದು ಇಚ್ಛಾಮತಿ ಮತ್ತು ಚೂರ್ಣಿ ನದಿಗಳಾಗಿ ಕವಲೊಡೆಯುತ್ತದೆ. ಮುರುಟಿಯಾದಲ್ಲಿ, ಈ ನದಿಯು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಹರಿಯುತ್ತದೆ.

ವೈರಲ್ ವಿಡಿಯೋವನ್ನು ಪರಿಶೀಲಿಸಲು, ನಾವು ಮುರುಟಿಯಾ ಪೊಲೀಸ್ ಠಾಣೆಯ ಇನ್-ಚಾರ್ಜ್ ಎಸ್‌ಐ ನಿರ್ಮಾಲ್ಯ ದತ್ತಾ ಅವರನ್ನು ಸಂಪರ್ಕಿಸಿದೆವು. ವಿಡಿಯೋ ಫಂಕಾತಲಾದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಜನರು ಕಾಳಿ ವಿಗ್ರಹ ವಿಸರ್ಜನೆಗಾಗಿ ಮಾಥಾಭಂಗಾ ನದಿಯ ನಿಮತಲಾ ಘಾಟ್‌ಗೆ ಹೋಗುತ್ತಿದ್ದರು ಎಂದು ಅವರು ದೃಢಪಡಿಸಿದರು. ವಿಡಿಯೋದಲ್ಲಿ ಕಾಣುವ ಗಡಿ ಬೇಲಿ ಮತ್ತು ಗೇಟ್ ಅನ್ನು ಈ ವರ್ಷದ ಆರಂಭದಲ್ಲಿ ನಿರ್ಮಿಸಲಾಗಿದೆ. ಪ್ರತಿವರ್ಷ ವಿಸರ್ಜನೆಗಾಗಿ ಇಲ್ಲಿ ದೊಡ್ಡ ಜನಸಮೂಹ ಸೇರುತ್ತದೆ ಎಂದು ಅವರು ತಿಳಿಸಿದರು. ಆದರೂ ಈ ವರ್ಷ ಹೊಸ ಗೇಟ್ ಮತ್ತು ಬೇಲಿಯಿಂದಾಗಿ ಜನಸಮೂಹವು ಸ್ವಲ್ಪ ಕಡಿಮೆಯಾಗಿತ್ತು ಎಂದು ಹೇಳಿದ್ದಾರೆ.

ದತ್ತಾ ಅವರು ಜನಸಮೂಹ ಸೇರಿದ್ದ ನಿಖರ ಸ್ಥಳದ ಜಿಯೋ-ಟ್ಯಾಗ್ ಮಾಡಿದ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣುವ ವೈಶಿಷ್ಟ್ಯಗಳು ಅವರು ಒದಗಿಸಿದ ಫೋಟೋದಲ್ಲಿರುವ ವೈಶಿಷ್ಟ್ಯಗಳಿಗೆ ಹೊಂದಿಕೆಯಾಗುತ್ತವೆ. ಈ ಹೋಲಿಕೆಯನ್ನು ಕೆಳಗೆ ತೋರಿಸಲಾಗಿದೆ:

25 ನವೆಂಬರ್ 2025 ರಂದು ಮಾಡಿದ ‘X’ ಪೋಸ್ಟ್‌ನಲ್ಲಿ, ಪಶ್ಚಿಮ ಬಂಗಾಳ ಪೊಲೀಸರು ವೈರಲ್ ವಿಡಿಯೋವನ್ನು ಸುಳ್ಳು ಕ್ಲೈಮ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಮತ್ತು ಅದು ಅಕ್ರಮ ವಲಸಿಗರು ರಾಜ್ಯವನ್ನು ತೊರೆಯುತ್ತಿರುವುದನ್ನು ತೋರಿಸುತ್ತಿಲ್ಲ, ಬದಲಾಗಿ ನದಿಯಾ ಜಿಲ್ಲೆಯ ಫುಂಕೋಟಾಲಾ ಗ್ರಾಮದಲ್ಲಿ ಕಾಳಿ ವಿಗ್ರಹ ವಿಸರ್ಜನೆಯ ದೃಶ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ದಾರಿತಪ್ಪಿಸುವ ವಿಷಯವನ್ನು ಹರಡದಂತೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಕಾಳಿ ವಿಗ್ರಹ ವಿಸರ್ಜನೆಯ ವಿಡಿಯೋವನ್ನು ಎಸ್‌ಐಆರ್ (SIR) ಘೋಷಣೆಯ ನಂತರ ಅಕ್ರಮ ಬಾಂಗ್ಲಾದೇಶಿಯರು ಹೊರಡುತ್ತಿದ್ದಾರೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll