Fake News - Kannada
 

ಹಿಂದೂ ದೇವಸ್ಥಾನವನ್ನು ಮುಸ್ಲಿಂ ವ್ಯಕ್ತಿಯೊಬ್ಬ ನಾಶ ಮಾಡಿದ್ದಾನೆ ಎಂಬುದು ಸುಳ್ಳು

0

ಮುಸ್ಲಿಂ ವ್ಯಕ್ತಿಯೊಬ್ಬ ದೇವಾಲಯದ ಪ್ರವೇಶ ದ್ವಾರವನ್ನು(ಆರ್ಚ್) ಒಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಂಧ್ರಪ್ರದೇಶದ ಪುರಾತನ ದೇವಾಲಯವನ್ನು ಮುಸ್ಲಿಮರು ಕೆಡವುತ್ತಿರುವುತ್ತಿದ್ದಾರೆ, ಮುಸ್ಲಿಮರಿಂದ  ಸಸತವಾಗಿ ದಾಳಿಗೊಳಗಾಗಿದ್ದ ದೇಶದ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ ಎಂದು ಪ್ರತಿಪಾದಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪುರಾತನ ಹಿಂದೂ ದೇವಾಲಯವನ್ನು ಕೆಡವುತ್ತಿರುವ ದೃಶ್ಯಗಳನ್ನು ನೋಡಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಆಂಧ್ರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪುರಾತನ ಹಿಂದೂ ದೇವಾಲಯವನ್ನು ಕೆಡವುತ್ತಿರುವ ದೃಶ್ಯಗಳು.

ನಿಜಾಂಶ: ವೀಡಿಯೊದಲ್ಲಿ ತೋರಿಸಿರುವ ಘಟನೆಯು ಆಂಧ್ರಪ್ರದೇಶದ ಗುಂಟೂರಿನಲ್ಲಿ 12 ಅಕ್ಟೋಬರ್ 2022 ರಂದು ನಡೆದಿದೆ. ಮಾಧ್ಯಮ ವರದಿಗಳು ಮತ್ತು ಗುಂಟೂರು ಪೊಲೀಸರ ಪ್ರಕಾರ, ವೀಡಿಯೊದಲ್ಲಿ ತೋರಿಸಿರುವ ರಚನೆಯು ದೇವಾಲಯವಲ್ಲ. ಇದು ‘ಹಜರತ್ ಬಾಜಿ ಬಾಬಾ ನಿಶಾನ್’ ದರ್ಗಾವನ್ನು 40 ವರ್ಷಗಳ ಹಿಂದೆ ರೆಹಮಾನ್ ಅಲಿಯಾಸ್ ಯೇಸು ರತ್ನಂ ಎಂಬ ಮತಾಂತರಗೊಂಡ ಮುಸ್ಲಿಂ ವ್ಯಕ್ತಿಯಿಂದ ನಿರ್ಮಿಸಲಾಗಿದೆ. ಅವರ ದಿವಂಗತ ಪತ್ನಿ ನಾಗ ರತ್ನಮ್ಮ ಅವರಿಗೆ ಶ್ರದ್ಧಾಂಜಲಿಯಾಗಿ, ಅವರು ರಚನೆಯ ಪ್ರವೇಶದ್ವಾರದಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯೊಂದಿಗೆ ಹಾವುಗಳನ್ನು ಉಳ್ಳ ರಚನೆ ಮಾಡಿದ್ದರು. ಅಲ್ಲಿ ಧರ್ಮ ಭೇದವಿಲ್ಲದೆ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ರೆಹಮಾನ್‌ನ ಮರಣದ ನಂತರ, ಅವರ ಮಗಳು ಮತ್ತು ಇತರರು ಈ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಬೇಕೆಂದು ಅವರ ತಂದೆ ಬಯಸಿದ್ದರು ಎಂದು 12 ಅಕ್ಟೋಬರ್ 2022 ರಂದು ಅದನ್ನು ಕೆಡವಲು ಪ್ರಯತ್ನಿಸಿದರು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪರಿಶೀಲಿಸಲು ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಇದೇ ಘಟನೆಯ ಕುರಿತು ಹಲವು ಮಾಧ್ಯಮಗಳು ಪ್ರಕಟಿಸಿರುವ ಸುದ್ದಿ ಲೇಖನಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ಓದಬಹುದು. ಈ ವರದಿಗಳ ಪ್ರಕಾರ, 12 ಅಕ್ಟೋಬರ್ 2022 ರಂದು, ಆಂಧ್ರಪ್ರದೇಶದ ಗುಂಟೂರಿನ ಎಲ್ಆರ್ ಕಾಲೋನಿಯಲ್ಲಿರುವ ‘ಹಜರತ್ ಬಾಜಿ ಬಾಬಾ ನಿಶಾನ್’ ದರ್ಗಾವನ್ನು ಕೆಲವು ಅಪರಿಚಿತರು ಕೆಡವಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ದರ್ಗಾದಲ್ಲಿ ಕಳೆದ 40 ವರ್ಷಗಳಿಂದ ಎಲ್ಲಾ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಜಮೀನು ಮಾಲೀಕರು ಮೃತಪಟ್ಟಾಗ ಸ್ಥಳೀಯರೇ ನಿರ್ವಹಣೆ ಮಾಡುವುದರ ಜತೆಗೆ ದುರಸ್ತಿ ಕಾರ್ಯಕ್ಕೂ ಹಣ ಸಂಗ್ರಹಿಸಿದ್ದರು. ಆದಾಗ್ಯೂ, 12 ಅಕ್ಟೋಬರ್ 2022 ರಂದು ಕೆಲವು ಜನರು ಆ ಸ್ಥಳದಲ್ಲಿ ಹೊಸ ಮಸೀದಿಯನ್ನು ನಿರ್ಮಿಸುವುದಾಗಿ ಹೇಳಿಕೊಂಡು ದರ್ಗಾವನ್ನು ಕೆಡವಲು ಪ್ರಯತ್ನಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಲಾಲಾಪೇಟ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭಾಕರ್, ”ಯೇಸು ರತ್ನಂ ಅಲಿಯಾಸ್ ರೆಹಮಾನ್ ಹಾಗೂ ಪತ್ನಿ ನಾಗ ರತ್ನಮ್ಮ ಗುಂಟೂರಿನ ಎಲ್‌ಆರ್ ಕಾಲೋನಿಯಲ್ಲಿ ವಾಸವಾಗಿದ್ದರು. ಸುಮಾರು 40 ವರ್ಷಗಳ ಹಿಂದೆ ಅವರ ಪತ್ನಿಯ ಮರಣದ ನಂತರ, ಅವರು ದರ್ಗಾದಂತಹ ರಚನೆಯನ್ನು (ಸ್ಮಾರಕ) ನಿರ್ಮಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇತರ ನಿವಾಸಿಗಳು ತಮ್ಮ ಧರ್ಮವನ್ನು ಲೆಕ್ಕಿಸದೆ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಯೇಸು ರತ್ನಂ ಅವರ ಮರಣದ ನಂತರ, ಅವರ ಮಗಳು ಸತ್ಯವತಿ ಮತ್ತು ಸಂಗಡಿ ಗುಂಟೂರಿನ ಹತ್ತಿರದಲ್ಲಿರುವ  ಮಸೀದಿಯ ಸದಸ್ಯರು ಈ ದರ್ಗಾದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಅಕ್ಟೋಬರ್ 12, 2022 ರಂದು, ಕೆಲವು ಅಪರಿಚಿತ ವ್ಯಕ್ತಿಗಳು ಕಾಂಪೌಂಡ್ ಗೋಡೆಯನ್ನು ಕೆಡವಲು ಪ್ರಯತ್ನಿಸಿದರು, ಆದರೆ ಸ್ಥಳೀಯರು ಅದನ್ನು ಪ್ರತಿಭಟಿಸಿದರು. ಇಡೀ ಘಟನೆ ಭೂ ವಿವಾದಕ್ಕೆ ಸಂಬಂಧಿಸಿದ್ದೇ ಹೊರತು ಕೋಮುವಾದದ್ದಲ್ಲ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಾಲಾಪೇಟ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭಾಕರ್ ತಿಳಿಸಿದ್ದಾರೆ.

“ರೆಹಮಾನ್ ಕ್ರಿಶ್ಚಿಯನ್ ಧರ್ಮದವರಾಗಿದ್ದರು, ನಂತರ ಇಸ್ಲಾಂಗೆ ಮತಾಂತರ ಹೊಂದಿದ್ದರು, ಅವರ  ಪತ್ನಿ ನಾಗ ರತ್ನಮ್ಮ, ಅವರ ಮರಣಾದ ನಂತರ ಅವರ ಹೆಸರಿನಲ್ಲಿ ನಾಗನ (ಹಾವುಗಳ) ಪ್ರತಿಮೆಯನ್ನು ಹಾಕಿದರು ಮತ್ತು ಅವರು ದರ್ಗಾದಲ್ಲಿ ಚಂದ್ರ ಮತ್ತು ನಕ್ಷತ್ರವನ್ನು ಹಾಕಿದರು. ಆದರೆ, ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವವರು ಕೇವಲ ನಾಗ ಪ್ರತಿಮೆಯತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಪ್ರಭಾಕರ್ ಬೂಮ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಿನ ಪ್ರವೇಶದ ದೃಶ್ಯಗಳನ್ನು ಇಲ್ಲಿ ನೋಡಬಹುದು.

ಅಲ್ಲದೆ, ಗುಂಟೂರು ಜಿಲ್ಲಾ ವಕ್ಫ್ ಬೋರ್ಡ್ ಇನ್ಸ್‌ಪೆಕ್ಟರ್ ಮುಖ್ತಾರ್ ಬಾಷಾ ಅವರು ತನಿಖೆ ನಡೆಸಿದಾಗ, ಈ ಸ್ಥಳದಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿಯ ಸಮಾಧಿ ಇಲ್ಲ ಎಂದು ಸ್ಥಳೀಯರು ಬಹಿರಂಗಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ದರ್ಗಾಗಳು ಧಾರ್ಮಿಕ ವ್ಯಕ್ತಿಗಳ ಸಮಾಧಿಗಳ ಮೇಲೆ ನಿರ್ಮಿಸಲಾದ ದೇವಾಲಯಗಳಾಗಿವೆ. ಇನ್ನಾದರೂ ರಾಜ್ಯ ಸರಕಾರ ಈ ಬಗ್ಗೆ ಗಮನಹರಿಸಿ ನ್ಯಾಯ ಕೊಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಸ್ಲಿಂ ವ್ಯಕ್ತಿಯ ಸ್ಮಾರಕದ ಮೇಲಿನ ಭೂ ವಿವಾದವನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಂಧ್ರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪುರಾತನ ಹಿಂದೂ ದೇವಾಲಯವನ್ನು ಕೆಡವುತ್ತಿರುವ ದೃಶ್ಯಗಳನ್ನು ಎಂದು ವಿಡಿಯೋ ಪೋಸ್ಟ್‌ ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು.

Share.

Comments are closed.

scroll