Fake News - Kannada
 

ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ದರ್ಬಾರ್ ಷರೀಫ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಲಿಂಕ್ ಮಾಡಲಾಗುತ್ತಿದೆ

0

ಏಪ್ರಿಲ್ ಮೊದಲ ವಾರದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ 2025 ಜಾರಿಗೆ ಬಂದ ನಂತರ, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮುಸ್ಲಿಮರು ಹೊಸದಾಗಿ ಜಾರಿಗೆ ತಂದ ಕಾನೂನನ್ನು ವಿರೋಧಿಸುತ್ತಿದ್ದಾರೆ. ನ್ಯೂಸ್ ರಿಪೋರ್ಟ್ ಪ್ರಕಾರ (ಇಲ್ಲಿ, ಇಲ್ಲಿ), ಏಪ್ರಿಲ್ 11, 2025 ರಂದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟವು, ಇದರ ಪರಿಣಾಮವಾಗಿ ಹಿಂಸಾಚಾರ ಮತ್ತು ಗಲಭೆಗಳು ನಡೆದವು. ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹಿಂಸಾಚಾರದಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಹಿಂದೂಗಳು, ಚಂದನ್ ದಾಸ್ ಮತ್ತು ಹರ್ಗೋಬಿಂದ್ ದಾಸ್ ಗುಂಪು ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದು, ಒಬ್ಬ ಮುಸ್ಲಿಂ ವ್ಯಕ್ತಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು. ವರದಿಗಳ ಪ್ರಕಾರ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಿಂದ ಪ್ರಭಾವಿತರಾದ ನೂರಾರು ಜನರು (ಹೆಚ್ಚಾಗಿ ಹಿಂದೂಗಳು) ಭಾಗೀರಥಿ ನದಿಯನ್ನು ದಾಟಿ ಪಕ್ಕದ ಮಾಲ್ಡಾ ಜಿಲ್ಲೆಯಲ್ಲಿ ಆಶ್ರಯ ಪಡೆದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಏಪ್ರಿಲ್ 12, 2025 ರಂದು, ಕಲ್ಕತ್ತಾ ಹೈಕೋರ್ಟ್ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿತು (ಇಲ್ಲಿ, ಇಲ್ಲಿ). ಇದರ ನಡುವೆ ಟೋಪಿಗಳನ್ನು ಧರಿಸಿ ಕೋಲುಗಳು ಮತ್ತು ರಾಡ್‌ಗಳನ್ನು ಹಿಡಿದು ಅಲ್ಲಿದ್ದ ಆಸ್ತಿಗಳನ್ನು ಧ್ವಂಸ ಮಾಡುತ್ತಿರುವ ಪುರುಷರ ದೊಡ್ಡ ಗುಂಪನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಹಳ್ಳಿಯ ಮೇಲೆ ಮುಸ್ಲಿಂ ಗುಂಪೊಂದು ದಾಳಿ ಮಾಡಿ ಹಿಂದೂಗಳ ಮನೆಗಳು ಮತ್ತು ಬೆಳೆಗಳನ್ನು ನಾಶಪಡಿಸಿ ಜಾನುವಾರುಗಳನ್ನು ಲೂಟಿ ಮಾಡಿರುವುದನ್ನು ಚಿತ್ರಿಸುವ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಕೆಲವು ಪೋಸ್ಟ್‌ಗಳು ಬಾಂಗ್ಲಾದೇಶ-ಮುರ್ಷಿದಾಬಾದ್ ಗಡಿಯ ಮೂಲಕ ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಮುಸ್ಲಿಮರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವುದನ್ನು ವೀಡಿಯೊ ತೋರಿಸುತ್ತದೆ ಎಂದು ಆರೋಪಿಸಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ಹಳ್ಳಿಯ ಮೇಲೆ ಮುಸ್ಲಿಂ ಗುಂಪೊಂದು ದಾಳಿ ಮಾಡಿ, ಹಿಂದೂಗಳ ಮನೆ ಮತ್ತು ಬೆಳೆಗಳನ್ನು ನಾಶಪಡಿಸಿ, ಜಾನುವಾರುಗಳನ್ನು ಲೂಟಿ ಮಾಡುತ್ತಿರುವುದನ್ನು ವೀಡಿಯೊಗಳು ತೋರಿಸುತ್ತವೆ.

ಫ್ಯಾಕ್ಟ್: ಈ ವೈರಲ್ ವೀಡಿಯೊ ನವೆಂಬರ್ 2024 ರದಾಗಿದೆ.  ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ವೀಡಿಯೊ ಬಾಂಗ್ಲಾದೇಶದ ಮುರ್ಷಿದಾಬಾದ್‌ನಲ್ಲಿ ಎರಡು ಮುಸ್ಲಿಂ ಗುಂಪುಗಳ ನಡುವಿನ ಹಿಂಸಾತ್ಮಕ ಘಟನೆಯಾಗಿದೆ.  ವೀಡಿಯೊದಲ್ಲಿನ ಈ ಘಟನೆ 2024 ರ ನವೆಂಬರ್ 26 ರಂದು ಬಾಂಗ್ಲಾದೇಶದ ಶೇರ್‌ಪುರದಲ್ಲಿ ಸಂಭವಿಸಿದೆ. ದರ್ಬಾರ್ ಇಸ್ಲಾಮಿಕ್ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂಬ ಸ್ಥಳೀಯ ಮದರಸಾ ಶಿಕ್ಷಕರು ಮತ್ತು ನಿವಾಸಿಗಳ ಆರೋಪದ ಮೇರೆಗೆ ಈ ದಾಳಿ ನಡೆದಿದೆ. ವರದಿಗಳ ಪ್ರಕಾರ, ಸುಮಾರು 400-500 ಜನರು ಸ್ಥಳಕ್ಕೆ ನುಗ್ಗಿ ಆಸ್ತಿ ಮತ್ತು ಬೇಲಿಗಳಿಗೆ ಹಾನಿ ಮಾಡಿದರು.  ಭಕ್ತರು ಪ್ರತಿಭಟಿಸಿದಾಗ ಘರ್ಷಣೆಗಳು ಭುಗಿಲೆದ್ದವು, ಇದರ ಪರಿಣಾಮವಾಗಿ ಹಲವಾರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಿಂದ ಪ್ರಭಾವಿತರಾದ ನೂರಾರು ಜನರು, ಅದರಲ್ಲೂ ಹೆಚ್ಚಾಗಿ ಹಿಂದೂಗಳು, ಭಾಗೀರಥಿ ನದಿಯನ್ನು ದಾಟಿ ನೆರೆಯ ಮಾಲ್ಡಾ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ.  ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಇದು 29 ನವೆಂಬರ್ 2024 ರ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ X ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು. ಪೋಸ್ಟ್‌ನ ವಿವರಣೆಯ ಪ್ರಕಾರ, ವೀಡಿಯೊವು ನವೆಂಬರ್ 2024 ರಲ್ಲಿ ಬಾಂಗ್ಲಾದೇಶದ ಶೇರ್‌ಪುರದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ. ಅಲ್ಲಿ ಹಿಂದಿನ ಘರ್ಷಣೆಯಲ್ಲಿ  ಹಫೀಜ್ ಉದ್ದೀನ್ ಎಂಬ ವ್ಯಕ್ತಿ ಸಾವನ್ನಪ್ಪಿದ ನಂತರ ಉಂಟಾದ ವಿವಾದದಿಂದಾಗಿ ದೇವಾಲಯದ ಮೇಲೆ ದಾಳಿ ಮಾಡಲಾಯಿತು. ಈ ಪೋಸ್ಟ್‌ನಲ್ಲಿ ನಡೆದ ಘಟನೆಯ ಕುರಿತು ಸುದ್ದಿ ವರದಿಗಳನ್ನೂ ಕಾಣಬಹುದು. 

X ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಸುದ್ದಿ ವರದಿಯು, ನವೆಂಬರ್ 26, 2024 ರ ಬೆಳಿಗ್ಗೆ ಬಾಂಗ್ಲಾದೇಶದ ಶೇರ್‌ಪುರ್ ಸದರ್ ಉಪಜಿಲಾದ ಲಚ್‌ಮನ್‌ಪುರ ಪ್ರದೇಶದ ಮುರ್ಷಿದ್‌ಪುರ್ ಪಿರ್‌ನ ದರ್ಬಾರ್‌ನಲ್ಲಿ ನಡೆದ ವಿಧ್ವಂಸಕ ಘಟನೆಯನ್ನು ವಿವರಿಸಿದೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ಗೂಗಲ್ ಹುಡುಕಾಟವನ್ನು ನಡೆಸಿದ್ದೇವೆ. ಅದು ನಮಗೆ ಢಾಕಾ ಟ್ರಿಬ್ಯೂನ್ ವರದಿಯನ್ನು ನೀಡಿದೆ. ವರದಿಯ ಪ್ರಕಾರ, ನವೆಂಬರ್ 26, 2024 ರಂದು ಶೇರ್‌ಪುರದ ಲಚ್‌ಮನ್‌ಪುರ ಪ್ರದೇಶದಲ್ಲಿ ಖ್ವಾಜಾ ಬದ್ರುದ್ದೀನ್ ಹೈದರ್ (ದೋಜಾ ಪಿರ್) ನೇತೃತ್ವದ ಮುರ್ಷಿದ್‌ಪುರ್ ದರ್ಬಾರ್ ಷರೀಫ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಲೂಟಿಗೆ ಸಂಬಂಧಿಸಿದಂತೆ ಪೊಲೀಸರು ಏಳು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ಮದರಸಾ ಶಿಕ್ಷಕರು ಮತ್ತು ದರ್ಬಾರ್‌ನಲ್ಲಿ ಇಸ್ಲಾಮಿಕ್ ವಿರೋಧಿ ಚಟುವಟಿಕೆಗಳ ಬಗ್ಗೆ ನಿವಾಸಿಗಳು ಆರೋಪಿಸಿದ ನಂತರ ಈ ದಾಳಿ ನಡೆದಿದೆ. ಸುಮಾರು 400-500 ಜನರು ಸ್ಥಳಕ್ಕೆ ನುಗ್ಗಿ, ಆಸ್ತಿಪಾಸ್ತಿಗೆ ಹಾನಿ ಮಾಡಿದ್ದು, ಉಸ್ತುವಾರಿಗಳು ಮತ್ತು ಭಕ್ತರು ಪ್ರತಿಭಟಿಸಿದಾಗ ಘರ್ಷಣೆಗಳು ಭುಗಿಲೆದ್ದವು, ಇದರ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡರು. 

2024 ರ ನವೆಂಬರ್ 26 ರ ಬೆಳಿಗ್ಗೆ, ದೇವಾಲಯದ ಮೇಲೆ ನಡೆದ ದಾಳಿಯಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆಯ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಅವರಲ್ಲಿ 40 ವರ್ಷದ ಸ್ಥಳೀಯ ವ್ಯಕ್ತಿ ಹಫೀಜ್ ಉದ್ದೀನ್, ನವೆಂಬರ್ 27, 2024 ರಂದು ಢಾಕಾ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಬೆಳಿಗ್ಗೆ 10:00 ಗಂಟೆಗೆ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಜಮ್ಶೆಡ್ ಅಲಿ ಸ್ಮಾರಕ ಪದವಿ ಕಾಲೇಜು ಮೈದಾನದಲ್ಲಿ ನಿಗದಿಪಡಿಸಲಾಗಿತ್ತು. ಅಂತ್ಯಕ್ರಿಯೆಗೆ ಮೊದಲು, ಹಾಜರಿದ್ದವರು ಕೋಪಗೊಂಡ ಕಾರಣ ಇದು ದೇವಾಲಯದ ಮೇಲೆ ಮತ್ತೊಂದು ದಾಳಿಗೆ ಕಾರಣವಾಯಿತು.

ಹೆಚ್ಚುವರಿಯಾಗಿ, ಘಟನೆಯ ವೀಡಿಯೊಗಳನ್ನು ಒಳಗೊಂಡ ಸುದ್ದಿ ವರದಿಗಳು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) (ಆರ್ಕೈವ್) ನಮಗೆ ಕಂಡುಬಂದಿವೆ. ವೈರಲ್ ವೀಡಿಯೊದೊಂದಿಗೆ ಅವುಗಳ ಹೋಲಿಕೆಯನ್ನು ಕೆಳಗೆ ನೋಡಬಹುದು.

ಈ ಎಲ್ಲಾ ಮಾಹಿತಿಗಳ ಮೂಲಕ  ವೈರಲ್ ಆಗಿರುವ ವೀಡಿಯೊವು  2024 ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ಶೇರ್ಪುರದಲ್ಲಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ತೋರಿಸುತ್ತದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024 ರ ನವೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ದರ್ಬಾರ್ ಷರೀಫ್ ಮೇಲೆ ನಡೆದ ದಾಳಿಯನ್ನು ತೋರಿಸುವ ವೀಡಿಯೊವನ್ನು ಮುರ್ಷಿದಾಬಾದ್‌ನಲ್ಲಿ ನಡೆದ ಇತ್ತೀಚಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll