Fake News - Kannada
 

ಮೇ 2025 ರ AIIMS ಋಷಿಕೇಶ್ ಹೆಲಿ ಆಂಬ್ಯುಲೆನ್ಸ್ ಅಪಘಾತಕ್ಕೀಡಾದ ವೀಡಿಯೊವನ್ನು ಜೂನ್ 2025 ರ ಗೌರಿಕುಂಡ್ ಹೆಲಿಕಾಪ್ಟರ್ ಅಪಘಾತಕ್ಕೆ ತಪ್ಪಾಗಿ ಶೇರ್ ಮಾಡಲಾಗಿದೆ

0

ಜೂನ್ 15, 2025 ರಂದು, ಉತ್ತರಾಖಂಡದ ಗೌರಿಕುಂಡ್ ಅರಣ್ಯದಲ್ಲಿ ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದಾಗ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ (ಇಲ್ಲಿ, ಇಲ್ಲಿ). ದುರಂತಕ್ಕೆ ಪ್ರತಿಕ್ರಿಯೆಯಾಗಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಚಾರ್ ಧಾಮ ಯಾತ್ರೆಯ ಸಮಯದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಸೇವೆಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಘೋಷಿಸಿದ್ದಾರೆ.

ಈ ಘಟನೆಯ ನಂತರ, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ ಗೌರಿಕುಂಡ್ ಅಪಘಾತದಲ್ಲಿ ಹೆಲಿಕಾಪ್ಟರ್ ಭಾಗಿಯಾಗಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಈ ವೀಡಿಯೊ ಜೂನ್ 15, 2025 ರಂದು ಉತ್ತರಾಖಂಡದ ಗೌರಿಕುಂಡ್‌ನಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ತೋರಿಸುತ್ತದೆ.  ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಫ್ಯಾಕ್ಟ್: ಈ ವೀಡಿಯೊ ಜೂನ್ 15, 2025 ರಂದು ಗೌರಿಕುಂಡ್‌ನಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ತೋರಿಸುವುದಿಲ್ಲ. ಇದು ಮೇ 17, 2025 ರಂದು ಕೇದಾರನಾಥದಲ್ಲಿ ಅಪಘಾತಕ್ಕೀಡಾದ ಏಮ್ಸ್ ರಿಷಿಕೇಶ್ ಹೆಲಿ ಆಂಬ್ಯುಲೆನ್ಸ್ ಅನ್ನು ಒಳಗೊಂಡ ಪ್ರತ್ಯೇಕ ಘಟನೆಯನ್ನು ತೋರಿಸುತ್ತದೆ. ವಿಮಾನದಲ್ಲಿದ್ದ ಮೂವರೂ ಬದುಕುಳಿದಿದ್ದಾರೆ. ಈ ಘಟನೆಯು ಜೂನ್ 2025 ರ ಗೌರಿಕುಂಡ್ ಅಪಘಾತಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 17 ಮೇ 2025 ರಂದು ET Now ನ್ಯೂಸ್‌ನ ಫೇಸ್‌ಬುಕ್ ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ಗೆ ನಮ್ಮನ್ನು ಕರೆದೊಯ್ಯಿತು, ಅಲ್ಲಿಯೂ ಅದೇ ದೃಶ್ಯಗಳನ್ನು ಕಂಡುಕೊಂಡೆವು. ಈ ವೀಡಿಯೊ ಹಳೆಯದಾಗಿದ್ದು, ಜೂನ್ 15, 2025 ರಂದುಉತ್ತರಾಖಂಡದ ಗೌರಿಕುಂಡ್‌ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿಲ್ಲ ಎಂದು ಇದು ಖಚಿತಪಡಿಸುತ್ತದೆ. ಪೋಸ್ಟ್‌ನ ವಿವರಣೆಯ ಪ್ರಕಾರ, ವೀಡಿಯೊವು ಏಮ್ಸ್ ರಿಷಿಕೇಶದ ಹೆಲಿಕಾಪ್ಟರ್ ಆಂಬ್ಯುಲೆನ್ಸ್ ಸೇವೆಯ ಹೆಲಿಕಾಪ್ಟರ್‌ನ ಹಿಂಭಾಗದ ಭಾಗಕ್ಕೆ ಹಾನಿಯಾದ ನಂತರ ಕೇದಾರನಾಥದಲ್ಲಿ ಅಪಘಾತಕ್ಕೀಡಾದ ಪ್ರತ್ಯೇಕ ಘಟನೆಯನ್ನು ತೋರಿಸುತ್ತದೆ. ದೊಡ್ಡ ದುರಂತವೊಂದು ತಪ್ಪಿಹೋಯಿತು ಮತ್ತು ಕ್ಯಾಪ್ಟನ್, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೂವರು ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ. 

ಸುದ್ದಿ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಈ ಘಟನೆ ಮೇ 17, 2025 ರಂದು ನಡೆದಿದ್ದು, ಹೆಲಿಕಾಪ್ಟರ್ ಗಾಳಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅದರ ಟೈಲ್ ರೋಟರ್‌ಗೆ ಹಾನಿಯಾಯಿತು, ಇದರಿಂದಾಗಿ ಪೈಲಟ್ ಕೇದಾರನಾಥ ಹೆಲಿಪ್ಯಾಡ್ ಬಳಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ಡೈರೆಕ್ಟರ್ ಜನರಲ್ ಆ ಸಿವಿಲ್ ಏವಿಯೇಷನ್ / ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ವಿಷಯದ ಬಗ್ಗೆ ತಾಂತ್ರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಹಾಗಾಗಿ, ಮೇ 2025 ರ AIIMS ರಿಷಿಕೇಶ್ ಹೆಲಿ ಆಂಬ್ಯುಲೆನ್ಸ್ ಕ್ರ್ಯಾಶ್-ಲ್ಯಾಂಡಿಂಗ್‌ನ ವೀಡಿಯೊವನ್ನು ಜೂನ್ 2025 ರ ಗೌರಿಕುಂಡ್ ಹೆಲಿಕಾಪ್ಟರ್ ಅಪಘಾತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ. 

Share.

Comments are closed.

scroll