Fake News - Kannada
 

2019 ರ ಟಿಟಿಇ ಒಬ್ಬ ಪ್ರಯಾಣಿಕನಿಂದ ಹಣವನ್ನು ಕಸಿದುಕೊಳ್ಳುವ ವೀಡಿಯೊವನ್ನು 2025 ರ ಮಹಾ ಕುಂಭದ ಸಂದರ್ಭದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಮಹಾ ಕುಂಭಮೇಳವು ಫೆಬ್ರವರಿ 2025 ರಲ್ಲಿ ಮುಕ್ತಾಯಗೊಳ್ಳಲಿದ್ದು, ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಲೇ ಇದ್ದಾರೆ (ಇಲ್ಲಿ ಮತ್ತು ಇಲ್ಲಿ). ಈ ಮಧ್ಯೆ, ರೈಲು ಟಿಕೆಟ್ ಪರೀಕ್ಷಕರು (ಟಿಟಿಇ) ವೃದ್ಧ ರೈಲು ಪ್ರಯಾಣಿಕರೊಬ್ಬರಿಂದ ಹಣವನ್ನು ಕಸಿದುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಪ್ರಯಾಣಿಕನು ಮಹಾ ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ಭಕ್ತರಾಗಿದ್ದು, ಅನ್ಯಾಯವಾಗಿ ಹಣ ಪಾವತಿಸಲು ಒತ್ತಾಯಿಸಲಾಯಿತು ಎಂದು ಹೇಳಲಾಗಿದೆ . ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಕುಂಭಮೇಳ ಭಕ್ತನಿಂದ ಟಿಟಿಇ  ಹಣವನ್ನು ಕಸಿದುಕೊಳ್ಳುತ್ತಿರುವ ವೈರಲ್ ವೀಡಿಯೊ.

ಫ್ಯಾಕ್ಟ್: ನಿಜವಾಗಿಯೂ ಈ ವೀಡಿಯೊ 2019 ರದ್ದು, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೂರ್ವ ಮಧ್ಯ ರೈಲ್ವೆ ಮುಘಲ್ಸರಾಯ್ ವಿಭಾಗದಲ್ಲಿ  ಟಿಟಿಇ ವಿನಯ್ ಸಿಂಗ್ ಅವರು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತೋರಿಸುತ್ತದೆ. ಪೋಸ್ಟ್ ಮಾಡಲಾದ ವೀಡಿಯೊ ಮತ್ತೆ ಕಾಣಿಸಿಕೊಂಡ ಮೂರು ತಿಂಗಳ ಮೊದಲು ಈ ಘಟನೆ ನಡೆದಿತ್ತು. ಇದು ವೈರಲ್ ಆದ ನಂತರ, ಟಿಟಿಇ ಅವರನ್ನು ಅಮಾನತುಗೊಳಿಸಿ,  ತನಿಖೆಯನ್ನು ಪ್ರಾರಂಭಿಸಲಾಯಿತು. ಈ ವೀಡಿಯೊಗೆ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಕ್ಲೇಮ್ ತಪ್ಪು.

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಜುಲೈ 23, 2019 ರ ಹಿಂದಿನ ಒಂದೇ ವೀಡಿಯೊದ ಹಲವಾರು ವಿಧಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ತೋರಿಸಿದೆ. ಆ ಸಮಯದಲ್ಲಿ ಹಲವಾರು ಉಸೆರ್ಸ್ X ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿ, ಭಾರತೀಯ ರೈಲ್ವೆಯನ್ನು ಟ್ಯಾಗ್ ಮಾಡಿದ್ದರು. ಇಂತಹ ಕೃತ್ಯಗಳು ನಡೆಯುತ್ತಿದೆ  ಎಂದು ಹೇಳುವ ಕಳ್ಳತನದ ನಿದರ್ಶನಗಳನ್ನು ಎತ್ತಿ ತೋರಿಸಿದ್ದರು.

X ನಲ್ಲಿ ಬ್ರಿಜೇಶ್ ಮಿಶ್ರಾ ಅವರ ಪೋಸ್ಟ್ ಅಫೀಷಿಯಲ್ ರೈಲ್ವೆ ಸೇವಾ ಹ್ಯಾಂಡಲ್‌ನ ಗಮನಕ್ಕೆ ಬಂದಿತ್ತು. ಇದರ ಕುರಿತು ವಿವರಣೆ ಕೇಳಿದ  ಅದೇ ದಿನ, ಜುಲೈ 23, 2019 ರಂದು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಭಾಗದ ಡಿಆರ್‌ಎಂ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಉದ್ಯೋಗಿಯಿಂದ ವಿವರಣೆಯನ್ನು ಕೇಳಲಾಗಿದೆ ಎಂದು ಹೇಳಿದರು. ಘಟನೆ 3-4 ತಿಂಗಳ ಹಿಂದೆ ಸಂಭವಿಸಿತ್ತು,  ಟಿಕೆಟ್ ನೀಡಲು ಹಣ ಸಂಗ್ರಹಿಸುತ್ತಿರುವುದಾಗಿ ಉದ್ಯೋಗಿ ಹೇಳಿಕೊಂಡಿದ್ದರು.  ಆದರೆ  ಹೆಚ್ಚಿನ ತನಿಖೆಗಾಗಿ, ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ತನಿಖೆಯು ನಮಗೆ ಹಲವಾರು ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ನೀಡಿದೆ, ಅದರಲ್ಲಿ ಜುಲೈ 25, 2019 ರಂದು ಅಮರ್ ಉಜಾಲಾ ಅವರಿಂದ ಬಂದ ವರದಿಯೂ ಒಂದಾಗಿದೆ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೂರ್ವ ಮಧ್ಯ ರೈಲ್ವೆ ಮುಘಲ್ಸರಾಯ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಟಿಟಿಇ ವಿನಯ್ ಸಿಂಗ್ ಅವರನ್ನು ವೃದ್ಧ ಪ್ರಯಾಣಿಕರೊಬ್ಬರಿಂದ ಬಲವಂತವಾಗಿ ಹಣ ಪಡೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಈ ಘಟನೆ ಮೂರು ತಿಂಗಳ ಹಿಂದೆ ನಡೆದಿತ್ತು ಎಂದು ವರದಿಯಾಗಿದೆ. ಆದರೆ ಮತ್ತೆ ಕಾಣಿಸಿಕೊಂಡ ವೀಡಿಯೊ ರೈಲ್ವೆ ನೌಕರರಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸಾರ್ವಜನಿಕರ ಆಕ್ರೋಶದ ನಂತರ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪಂಕಜ್ ಸಕ್ಸೇನಾ ಆರೋಪಿ ಟಿಟಿಇಯನ್ನು ಅಮಾನತುಗೊಳಿಸಿ ತನಿಖೆಯನ್ನು ಪ್ರಾರಂಭಿಸಿದರು. ವಿಚಾರಣೆಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಬೇಕಾಗಿದೆ. 

ಹೆಚ್ಚುವರಿಯಾಗಿ, ಟಿಟಿಇಯೊಬ್ಬರು ಕುಂಭಮೇಳದ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವೀಡಿಯೊ ಅಥವಾ ವರದಿ ನಮಗೆ ಸಿಕ್ಕಿಲ್ಲ. ಇದಲ್ಲದೆ, ವೈರಲ್ ಆಗಿರುವ ವೀಡಿಯೊಗೂ ಈ ಮಹಾ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ, ಏಕೆಂದರೆ ಅದು 2019 ರ ಹಿಂದಿನದು.

ಒಟ್ಟಾರೆಯಾಗಿ ಹೇಳುವುದಾದರೆ, ಟಿಟಿಇಯೊಬ್ಬರು ಪ್ರಯಾಣಿಕರಿಂದ ಹಣವನ್ನು ಕಸಿದುಕೊಳ್ಳುವ 2019 ರ ವೀಡಿಯೊವನ್ನು 2025 ರ ಕುಂಭಮೇಳಕ್ಕೆ ಸಂಬಂಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll