ಕೇದಾರನಾಥ ಧಾಮ ಯಾತ್ರಿಕರ ಮೇಲೆ ಕುದುರೆ ನಿರ್ವಾಹಕರು ಹಲ್ಲೆ ಮಾಡಿದ ವೀಡಿಯೊವನ್ನು ಈಗ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಉತ್ತರಾಖಂಡ್‌ನಲ್ಲಿ ಕೇದಾರನಾಥ ಧಾಮ ಯಾತ್ರಿಕರ ಮೇಲೆ ಮುಸ್ಲಿಂ ಪೋನಿ ಸೇವಾ ಪೂರೈಕೆದಾರರು ಕೋಲುಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ  ಪೋಸ್ಟ್ನಲ್ಲಿ, ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಮರು ಕುದುರೆ ಸವಾರಿ ಸೇವೆಗಳು ಮತ್ತು ಇತರ ವ್ಯವಹಾರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಮತ್ತು ಹಿಂದೂ ಯಾತ್ರಿಕರ ಮೇಲೆ ಮತ್ತಷ್ಟು ಆಕ್ರಮಣ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಉತ್ತರಾಖಂಡದ ಕೇದಾರನಾಥ ಧಾಮ ಯಾತ್ರಿಕರ ಮೇಲೆ ಮುಸ್ಲಿಂ ಕುದುರೆ ನಿರ್ವಾಹಕರು ಹಲ್ಲೆ ನಡೆಸಿದ ವಿಡಿಯೋ.

ಫ್ಯಾಕ್ಟ್: ಭೀಮ್ ಬಾಲಿ ಸೇತುವೆ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಕುದುರೆ ನಿರ್ವಾಹಕರು ಮುಸ್ಲಿಮರಲ್ಲ. ಕೇದಾರನಾಥ ಧಾಮ ಪಾದಚಾರಿ ಮಾರ್ಗದಲ್ಲಿ ಯಾತ್ರಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರುದ್ರಪ್ರಯಾಗ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದು, ಮತ್ತೊಂದು ಟ್ವೀಟ್‌ನಲ್ಲಿ ಅಂಕಿತ್ ಸಿಂಗ್, ಸಂತೋಷ್ ಕುಮಾರ್, ರೋಹಿತ್ ಕುಮಾರ್ ಮತ್ತು ಗೌತಮ್ ಆರೋಪಿಗಳ ಹೆಸರುಗಳನ್ನು ತಿಳಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು  ವೀಡಿಯೊದ ವಿವರಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಿದಾಗ, 13 ಜೂನ್ 2023 ರಂದು ‘ದೇವಭೂಮಿ ಡೈಲಾಗ್’ ಸುದ್ದಿ ಸೈಟ್ ಪ್ರಕಟಿಸಿದ ಲೇಖನದಲ್ಲಿ ವೀಡಿಯೊದ ಕೆಲವು ಸ್ಕ್ರೀನ್‌ಗ್ರಾಬ್‌ಗಳು ಕಂಡುಬಂದಿವೆ. ರುದ್ರಪ್ರಯಾಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಈ ಸುದ್ದಿ ಸೈಟ್ ವರದಿ ಮಾಡಿದೆ. ಕೇದಾರನಾಥ ಧಾಮ ಯಾತ್ರಿಕರ ಮೇಲೆ ಹಲ್ಲೆ ನಡೆಸಿದ ನಾಲ್ಕು ಕುದುರೆ ನಿರ್ವಾಹಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ವಿವರಗಳನ್ನು ವರದಿ ಮಾಡಿ, ಹಲವಾರು ಇತರ ಸುದ್ದಿ ವೆಬ್‌ಸೈಟ್‌ಗಳು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವರದಿಗಳ ಪ್ರಕಾರ, ದೆಹಲಿಯ ನಿವಾಸಿ ತನುಕಾ ಪೊಂದಾರ್ ಅವರು ಕೇದಾರನಾಥ ಧಾಮಕ್ಕೆ ತನ್ನ ಪಾದಯಾತ್ರೆಯ ಸಮಯದಲ್ಲಿ ಭೀಮ್ ಬಾಲಿ ಸೇತುವೆಯ ಬಳಿ ಕುದುರೆಯ ದುಸ್ಥಿತಿಯನ್ನು ಕಂಡಿದ್ದರು. ಆಕೆ  ಸಹಾಯಕ್ಕಾಗಿ ಸುತ್ತಮುತ್ತಲಿನ ಜನರನ್ನು ಕೇಳಿದರೂ, ಯಾರೂ  ಅವಳ ಸಹಾಯಕ್ಕೆ ಮುಂದೆ ಬರಲಿಲ್ಲ. ಅದೇ ಸಮಯದಲ್ಲಿ, ಕುದುರೆ ನಿರ್ವಾಹಕನು ಪ್ರಾಣಿಯನ್ನು ನಿಷ್ಕರುಣೆಯಿಂದ ಹೊಡೆಯುವುದನ್ನು ಕಂಡ ಆಕೆ ಪ್ರಾಣಿಗೆ ಹಾನಿ ಮಾಡದಂತೆ ತಿಳಿಸಿದಳು. ಅವಳು ಆ ವ್ಯಕ್ತಿಯೊಂದಿಗೆ ಜಗಳವಾಡಿದ ತಕ್ಷಣ, ಕೆಲವು ಸಹ-ಕುದುರೆ ನಿರ್ವಾಹಕರು ಅವನೊಂದಿಗೆ ಸೇರಿಕೊಂಡರು, ಯಾತ್ರಿಕನನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಆಕೆ ಮತ್ತು ಆಕೆಯ ಸಹ ಪ್ರಯಾಣಿಕರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದರು. ಈ ಘಟನೆಯು 11 ಜೂನ್ 2023 ರಂದು ನಡೆದಿದೆ. ಈ ಘಟನೆಯ ಕುರಿತು ಸೋನ್‌ಪ್ರಯಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಇಲ್ಲಿ ನೋಡಬಹುದು.

ಕೇದಾರನಾಥ ಧಾಮ ಪಾದಚಾರಿ ಮಾರ್ಗದಲ್ಲಿ ಯಾತ್ರಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರುದ್ರಪ್ರಯಾಗ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದು, ಮತ್ತೊಂದು ಟ್ವೀಟ್‌ನಲ್ಲಿ ಆರೋಪಿಗಳ ಹೆಸರು ಅಂಕಿತ್ ಸಿಂಗ್, ಸಂತೋಷ್ ಕುಮಾರ್, ರೋಹಿತ್ ಕುಮಾರ್ ಮತ್ತು ಗೌತಮ್ ಎಂದು ಹೇಳಿದ್ದಾರೆ. ಘಟನೆಯಲ್ಲಿ ಅಪ್ರಾಪ್ತ ವಯಸ್ಕನೂ ಭಾಗಿಯಾಗಿದ್ದಾನೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ, ಆದರೆ ಅವರು ಅಪ್ರಾಪ್ತರ ಹೆಸರನ್ನು ಬಹಿರಂಗಪಡಿಸಲಿಲ್ಲ. ರುದ್ರಪ್ರಯಾಗ ಎಸ್ಪಿ ವಿಶಾಖ ಅಶೋಕ್ ಭಾದನೆ ಅವರು 14 ಜೂನ್ 2023 ರಂದು ಘಟನೆಯ ವಿವರವಾದ ವೀಡಿಯೊವನ್ನು ಬಿಡುಗಡೆ ಮಾಡಿದರು. ಭೀಮ್ ಬಾಲಿ ಸೇತುವೆ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಸಹ-ಪ್ರಯಾಣಿಕರ ಮೇಲೆ ದಾಳಿ ಮಾಡಿದ ಕುದುರೆ ನಿರ್ವಾಹಕರು ಮುಸ್ಲಿಮರಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇದಾರನಾಥ ಧಾಮ ಯಾತ್ರಿಕರ ಮೇಲೆ ಕುದುರೆ ನಿರ್ವಾಹಕರು ಹಲ್ಲೆ ಮಾಡಿದ ವೀಡಿಯೊವನ್ನು ಈಗ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.